• ಫೋನ್: +91 94485 24345 / +91 98451 50634
  • ಇಮೇಲ್: bcdcu1977@gmail.com
ಸಂಪರ್ಕದಲ್ಲಿರಿ:

ರಾಜ್ಯ ಕಾರ್ಯಕ್ರಮ

ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಸಹಕಾರಿಗಳಿಗೆ ಒಂದು ದಿನದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ

ಬನ್ನೇರುಘಟ್ಟ : ಆಧುನಿಕ ತಂತ್ರಜ್ಞಾನ ಬೆಳವಣಿಗೆಯಾದಂತೆ ಅದರ ಉಪಯೋಗದ ಜತೆಗೆ ದುರುಪಯೋಗದ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ತಂತ್ರಜ್ಞಾನದ ಬಳಕೆಯ ಸಮಯದಲ್ಲಿ ಮಹಿಳೆಯರು ಜಾಗೂರಕರಾಗಿರಬೇಕು. ವೈಯಕ್ತಿಕ ಮಾಹಿತಿಗಳು ಸೋರಿಕೆಯಾದಂತೆ ಎಚ್ಚರ ವಹಿಸಬೇಕು. ಸಹಕಾರ ಕ್ಷೇತ್ರದಲ್ಲಿಯೂ ಸಹ ಇಂದು ಮಹಿಳೆಯರು ಹಣಕಾಸಿನ ವ್ಯವಹಾರ ನಡೆಸುವಾಗ ತಂತ್ರಜ್ಞಾನ ಬಳಕೆಯ ಸಮಯದಲ್ಲಿ ಅತ್ಯಂತ ಜಾಗೃತೆಯಿಂದ ವ್ಯವಹರಿಸಿ ಎಂದು ಆಗ್ನೇಯ ಸೈಬರ್ ಅಪಾರಾಧ ವಿಭಾಗದ ಎಸಿಪಿ ಗೋವರ್ಧನ್ ಗೋಪಾಲ್ ಅವರು ತಿಳಿಸಿದರು.

ಸಹಕಾರ ಶಿಕ್ಷಣ ನಿಧಿ ಸಲ್ಲಿಕೆ

ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ ತಾಲೂಕು, ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು ಪೂರ್ವ ತಲೂಕು ಮತ್ತು ಆನೇಕಲ್ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರ ಶಿಕ್ಷಣ ನಿಧಿಯ ಚೆಕ್ಕುಗಳನ್ನು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರಿ ಹೆಚ್.ಪಿ. ರಾಜಕುಮಾರ್ ರವರ ಮೂಖಾಂತರ ಕರ್ನಾಟಕ ರಾಜ್ಯ ಸಹಕಾರ ಮಹಾಂಡಳದ ಅಧ್ಯಕ್ಷರಾದ ಶ್ರೀ ಜಿ.ಟಿ. ದೇವೇಗೌಡ ರವರಿಗೆ ನೀಡಿದರು.

೨೧-೦೧-೨೦೨೫ ರಂದು ಏರ್ಪಡಿಸಿದ ರಾಜ್ಯ ಮಟ್ಟದ ಕಾರ್ಯಕ್ರಮ

ಬೆಂಗಳೂರು:- ಸಹಕಾರ ಸಂಘಗಳ ಅಸ್ತಿತ್ವ ಇವತ್ತು ವಿಶ್ವಾಸದ ಮೇಲೆ ನಿಂತಿದೆ. ಸಹಕಾರಿಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಹಕಾರ ಕ್ಷೇತ್ರದ ಉಳಿವು ಸಾಧ್ಯ. ಸಹಕಾರ ಸಂಘಗಳು ಉಳಿದರೆ ಮಾತ್ರ ಬಡವರು, ರೈತರು, ಮಹಿಳೆಯರು ಸಮಾಜದಲ್ಲಿ ಆರ್ಥಿಕವಾಗಿ ಶಕ್ತರಾಗಲು ಸಾಧ್ಯ. ಯಾವುದೇ ಸಂಘದಲ್ಲಿ ಆಡಳಿತ ಮಂಡಳಿ ದಾರಿ ತಪ್ಪಿದರೆ ಆ ಸಂಘದ ವಿನಾಶ ಆದಂತೆ. ಇವತ್ತಿನ ದಿನಗಳಲ್ಲಿ ಸಾಮಾನ್ಯ ಜನರು ರಾಷ್ಟಿçÃಕೃತ ಬ್ಯಾಂಕಿಗೆ ಹೋಗಿ ಸಾಲ ಪಡೆಯುವುದು ಅಸಾಧ್ಯ. ಸಹಕಾರ ಸಂಘಗಳು ರಾಷ್ಟಿçÃಕೃತ ಬ್ಯಾಂಕಿಗೆ ಸಮನಾಗಿ ಕೆಲಸ ಮಾಡುತ್ತಿವೆ ಎಂದು ಮಾನ್ಯ ಶಾಸಕರಾದ ಶ್ರೀ ಕೆ. ಗೋಪಾಲಯ್ಯರವರು ಹೇಳಿದರು.

ದಿನಾಂಕ:೨೭.೦೭.೨೦೨೪ ರಂದು ಏರ್ಪಡಿಸಿದ ರಾಜ್ಯ ಮಟ್ಟದ ಕಾರ್ಯಕ್ರಮ

ಬೆಂಗಳೂರು- ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟವು ಸಹಕಾರ ಶಿಕ್ಷಣ, ತರಬೇತಿ, ಪ್ರಚಾರದ ಮೂಲಕ ಸಹಕಾರ ಸಂಘಗಳನ್ನು ಬಲಬಡಿಸುತ್ತಿದೆ. ಇತ್ತಿಚ್ಚಿನ ಸಹಕಾರಿ ಕಾಯ್ದೆ ಕಾನೂನು ತಿದ್ದುಪಡಿ ವಿಷಯಗಳ ಕುರಿತು ಉಪನ್ಯಾಸ ನೀಡುವುದರಿಂದ ಎಲ್ಲಾ ರೀತಿಯಾ ಸಂಘಗಳು ಕಾನೂನಾತ್ಮಕವಾಗಿ ಕೆಲಸ ನಿರ್ವಹಿಸಲು ಹಾಗೂ ಸಿಬ್ಬಂದಿಗಳಿಗೆ ಹೊಸ ವಿಷಯಗಳನ್ನು ತರಬೇತಿ ನೀಡುವುದರಿಂದ ಅವರು ಸಂಘಗಳಲ್ಲಿ ದೈನಂದಿನ ಕೆಲಸ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯವಾಗುತ್ತದೆ ಎಂದು ಹಿರಿಯ ಸಹಕಾರಿಗಳು ಹಾಗೂ ಸಮಾಜ ಸೇವಕರು (ಸೊಸೈಟಿ) ಆದ ಶ್ರೀ ಮಂಜುನಾಥ್ ರವರು ಹೇಳಿದರು.